ಓಡಿ ಬಾ

ಕ್ರಾಂತಿ ಕಂದ
ನಿನ್ನ ಅಂದ
ಕಾಣಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ

ನಗೆಗಡಲಲಿ ನಲಿದು ಬಾ
ಸುಳಿಯೊಡಲಲಿ ಸುಳಿದು ಬಾ
ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ ||

ಅಂಧಕಾರದಲ್ಲಿ ಬಂದು
ಮುಗಿಲಮಡಿಲಿನಲ್ಲಿ ನಿಂದು
ತಂಬೆಳಕನು ತಂದು ತಂದು
ಎಳೆಯೆಳೆಯಲಿ ಹರಡುವಂತೆ
ಬಾನಿನಲ್ಲಿ ಹೊಳೆವಸಂತೆ ಬಾ….

ಜೀವನದಿಂದುಕ್ಕಿ ಉಕ್ಕಿ
ಸಾವಕಡಲ ಎಣೆಯ ಮಿಕ್ಕಿ
ನೋವನೆಲ್ಲ ಸೆದೆಯನಿಕ್ಕಿ ಬಾ….

ಜೀವನದಲಿ ಸಾವಿನಲ್ಲಿ
ಕನಸಿನಲ್ಲಿ ನನಸಿನಲ್ಲಿ
ಸಪ್ತಜಗಗಳೊಡಲಿನಲ್ಲಿ
ಹರಿಯುತಿರುವ ಹೊನಲೆ ಬಾ
ಕಂದ ಕರೆಯುತಿರುವೆ ಬಾ….

ಗುಡುಗು ಗುಡುಗಿ ಸಿಡಿಲು ಸಿಡಿದು
ವಿಶ್ವಕರ್ಮನೆದೆಯನೊಡೆದು
ಭೂಗರ್ಭದ ಶಾಂತಿ ಕಡೆದು
ಜೀವತಂತಿ ಮಿಡಿದು ಮಿಡಿದು
ಹೊಸ ಜಗವನು ಸೃಜಿಸು ಬಾ
ಓ ಓಡಿಬಾ….

ಕಾವಿಲ್ಲದೆ ಜೀವವೆಲ್ಲಿ
ಕ್ರಾಂತಿ ಕಾವೆ ಬಾ
ನೋವಿಲ್ಲದೆ ಕಾವುದೆಲ್ಲಿ
ನೋವ ನುಡಿಯೆ ಬಾ
ಅಳಿವಿಲ್ಲದೆ ಉಳಿವು ಎಲ್ಲಿ
ಅಳಿವಿನುಳುಮೆ ಬಾ….

ಜೀವ ಸಂಗ್ರಾಮದಲ್ಲಿ
ಬಾಳಿನಿರುಳ ರಂಗದಲ್ಲಿ
ಸುಳಿಗಾಳಿಯ ಮಡುವಿನಲ್ಲಿ
ಸುಳಿಸುಳಿಯುತ ಬಾ
ಸುಖಸೃಜಿಸುವ ಬಾ….

ಬಾಳಬಯಲ ಬಳಸಿ ಸುತ್ತ
ಆಳುತಿರುವ ಗೋಳನತ್ತ
ಬೀಳುಗೊಳಿಸಿ ಅತ್ತ ಇತ್ತ
ನಗೆ ಹೊನಲನು ಹರುಡು ಬಾ

ಸುಖದ ಸುಗ್ಗಿ
ಬೆಳೆದು ಅಳೆದು
ಜೀವ ಹುಗ್ಗಿ
ಅಳೆದು ಅಳೆದು
ಎಲ್ಲ ಚೆಲ್ಲು ಬಾ
ಓ!

ಕ್ರಾಂತಿ ಕಂದ
ನಿನ್ನ ಅಂದ
ಕಾಣ ಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡವರು ಸಣ್ಣವರಾಗುವುದೇಕೆ?
Next post ಅರ್ಥ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys